Monday 18 February 2013

ಸೈಕೋ

ಈ ತನುವು ನಿನ್ನದೇ ನಿನ್ನಾಣೆ
ಈ ಮನವು ನಿನ್ನದೇ ನಿನ್ನಾಣೆ

ಈ ಒಲವು ನಿನ್ನದೇ ನಿನ್ನಾಣೆ
ಈ ಉಸಿರು ನಿನ್ನದೇ ನಿನ್ನಾಣೆ


ನೀನೇನೆ ಅಂದರು ನೀ ನನ್ನ ಕೊಂದರು
ಈ ಜೀವ ಹೋದರು ಪ್ರೇಮಿ ನೀನೆ
ನೀನೆ ಬೇಕು.....sss ನೀನೆ ಬೇಕು......sss
ನೀನಿಲ್ಲದೆ ಏನೀ ಬದುಕು
ನೀನೆ ಬೇಕು.....sss ನೀನೆ ಬೇಕು.....sss
ಈ ಬಾಳಿಗೆ ನೀನೆ ಬೆಳಕು


ಈ ತನುವು ನಿನ್ನದೇ ನನ್ನಾಣೆ
ಈ ಮನವು ನಿನ್ನದೇ ನನ್ನಾಣೆ

ಈ ಹೃದಯ ನಿನ್ನದೇ ನಿನ್ನಾಣೆ
ಈ ಜನುಮ ನಿನ್ನದೇ ನಿನ್ನಾಣೆ


ನೀ ಶಾಪ ಕೊಟ್ಟರು ನಾ ನಾಶವಾದರು
ನೂರಾರು ಜನ್ಮಕು ಪ್ರೇಮಿ ನೀನೆ
ನೀನೆ ಬೇಕು ನೀನೆ ಬೇಕು
ನೀನಿಲ್ಲದೆ ಏನೀ ಬದುಕು
ನೀನೆ ಬೇಕು ನೀನೆ ಬೇಕು
ನೀನಿಲ್ಲದೆ ಯಾಕಿ ಬದುಕು


ನಾ ನಿನ್ನನು ಮೆಚ್ಚಿದ ಕೂಡಲೆ ಈ ಪ್ರೇಮವು ಮೂಡಿದೆ
ನೀ ನನ್ನನು ಪ್ರೀತಿಯ ಮಾಡದೆ ಈ ಜೀವವು ನಿಲ್ಲದೆ
ಈ ನೆತ್ತರ ಕಣಕಣದೆ ನೀ ಬೆರೆತು ಹೋಗಿಹೆ
ನನ್ನಾಣೆಗೂ ಎಂದಿಗೂ ಪ್ರೇಮಿ ನೀನೆ
ನೀನೆ ಬೇಕು ನೀನೆ ಬೇಕು ನೀನಿಲ್ಲದೆ ಏನೀ ಬದುಕು
ನೀನೆ ಬೇಕು ನೀನೆ ಬೇಕು ನೀನಿಲ್ಲದೆ ಏನೀ ಬದುಕು

ಹಣ್ಣೆಲೆ ಚಿಗುರಿದಾಗ

ಹೂವು ಚೆಲುವೆಲ್ಲ ನಂದೆಂದಿತು
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ||

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು
ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು
ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆoದಿತು

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು
ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು
ಹೆಣ್ಣು ನಾಟ್ಯದರಸಿ ಪಾರ್ವತಿಯೆ ಹೆಣ್ಣೆoದಿತು

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು
ನೀಡುವೆ ಮಳೆ ತೊಳೆಯುವೆ ಕೊಳೆ ಸಮನಾರೆನಗೆಂತು
ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆoದಿತು

Monday 5 November 2012

ಗೆಜ್ಜೆಪೂಜೆ


ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ 
ಹೃದಯ ಸಂಗಮ ಅನುರಾಗ ಬಂಧ
ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ

ಜೀವ ಜೀವದ ಸ್ವರಸಂಚಾರ ಅಮೃತ ಚೇತನ ರಸಧಾರ

ರಾಧಾಮಾಧವ ವೇಣುವಿಹಾರ ಗೀತೆಯೆ ಪ್ರೀತಿಯ ಜೀವನಸಾರ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ದಿವ್ಯದಿಗಂತದ ಭಾಗ್ಯ ತಾರೆ ಭವ್ಯ ರಸಿಕತೆ ಬಾಳಿಗಾಸರೆ

ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ

ಹೃದಯ ಸಂಗಮ ಅನುರಾಗ ಬಂಧ ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ


Tuesday 30 October 2012

ರಾಮಾಚಾರಿ


ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ

ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ

ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ

ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ

ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ

ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ

ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

Tuesday 9 October 2012

ಅದ್ದೂರಿ


ಮುಸ್ಸಂಜೆ ವೇಳೆಲಿ, ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ... 

ಒಲವಿಲ್ಲದ ಒಡಲೆಲ್ಲಿದೆ, ತಾಯಿಲ್ಲದ ಮಡಿಲೆಲ್ಲಿದೆ.
ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ...
ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತ್ತಿದೆ....


ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ... 


ನಿನ್ನಾಣೆಗೂ ಗೊತ್ತಿಲ್ಲ ಈ ಒಂಟಿಯ ಹೊಸ ಆಟ,
ಕಳೆದು ಹೋಗೋ ಮುನ್ನ ಕೈ ಸೇರಬಾರದೆ...
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿಯ ಏನೆಂದು ನೀನೊಮ್ಮೆ ಕೇಳಬಾರದೆ...
ಹಳೆದಾದ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ, ಎದೆ ಗೂಡ ಗಡಿಯಾರ ನಿನ್ನಿಲ್ಲದೆ ನಡೆಯಲ್ಲ...
ಚೂರಗದ ಮನಸ್ಸೇಲ್ಲಿದೆ ಚೂರಾದರು ಮನ ಸೋಲಿದೆ
ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ... ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಬೇಡುತಿದೆ...


ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...


ಎದೆ ಮೇಲೆ ಮಾಡಿದ್ದ ಆ ಹಣೆಗೂ ಭಾಷೆಗೂ ಬಲವಿದ್ದರೆ ಒಲವನ್ನು ಕಾಯಬಾರದೆ...
ಉಸಿರೋಗೋ ಮುಂಚೆನೇ ಹೃದಯಕ್ಕೆ ತಾಯಾಗಿ ಬಡಿತಗಳ ಕೈ ತುತ್ತ ನೀಡಬಾರದೆ...
ಹೆಸರನ್ನು ಬರೆದಿಟ್ಟ ಗೋಡೆಗೂ ಉಸಿರಿಲ್ಲ..
ಮನಸ್ಸಾರೆ ಅಳಿಸೋಕೆ ಇದು ಗೊಂಬೆಯ ಕನಸಲ್ಲ.....
ದೂರಾದರೆ ನೋವಾಗದೇ.... ದೂರಾಗಲು ಭಯವಾಗಿದೆ.. ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತ್ತಿದೆ...
ನನ್ನ ಕನಸಿನ ಪೆಟ್ಟಿಗೆಗೆ ಬೀಗವು ಬೀಳುತ್ತಿದೆ...

ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...




Wednesday 22 August 2012

ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ

ಭಕ್ತಿಗೀತೆ 



ಕಲ್ಯಾಣಾಧ್ಬುತ ಗಾತ್ರಾಯಾ
ಕಾಮಿತಾರ್ಥ ಪ್ರದಾಯಿನೇ
ಶ್ರೀ ಮದ್ ವೆಂಕಟನಾಥಯಾ
ಶ್ರೀನಿವಾಸಯತೇ ನಮಃ
ಶ್ರೀನಿವಾಸಯತೇ ನಮಃ

ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಭೂ ಜಗಕೆ ಶುಭ ಮಾಡು ಶ್ರೀನಿವಾಸ

ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ

ಅತ್ರಿಮುನಿ ಮುಂತಾದ ಸಪ್ತಋಷಿಗಳು
ಆಕಾಶಗಂಗೆಯಿಂದ ತರಲು ಹೂಗಳು

ಅತ್ರಿಮುನಿ ಮುಂತಾದ ಸಪ್ತಋಷಿಗಳು
ಆಕಾಶಗಂಗೆಯಿಂದ ತರಲು ಹೂಗಳು

ಆಜಾನುಬಾಹುವೇ ಅಭ್ರಮೇಯ
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ

ಜಾಜಿಮಲ್ಲೆ, ಸೇವಂತಿಗೆ ಹೂಗಳು ಅರಳಿ
ಕಾದಿಹವು ಅಲಂಕರಿಸೇ ತವಪಾದವ

ಜಾಜಿಮಲ್ಲೆ, ಸೇವಂತಿಗೆ ಹೂಗಳು ಅರಳಿ
ಕಾದಿಹವು ಅಲಂಕರಿಸೇ ತವಪಾದವ

ತಂಗಾಳಿ ಸೌಗಂಧವ ಚೆಲ್ಲುತಿರುವುದು
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ

ಪಂಚವರ್ಣ ಗಿಣಿಗಳು ನಾಮ ಹಾಡಿವೆ
ಪಂಚಾಮೃತ ಅಭಿಷೇಕದ ವೇಳೆ ಕಾದಿದೆ

ಪಂಚವರ್ಣ ಗಿಣಿಗಳು ನಾಮ ಹಾಡಿವೆ
ಪಂಚಾಮೃತ ಅಭಿಷೇಕದ ವೇಳೆ ಕಾದಿದೆ

ಪಾಂಚಜನ್ಯ ಶಂಖದೊಡೆಯ ಪದ್ಮನಾಭನೇ
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ


Monday 11 June 2012

ಕಸ್ತೂರಿ ನಿವಾಸ


ಚಿತ್ರ: ಕಸ್ತೂರಿ ನಿವಾಸ


ಎಲ್ಲೇ ಇರು ಹೇಗೇ ಇರು
ಎಂದೆಂದು ಮನದಲ್ಲಿ ನೀ ತುಂಬಿರು
/
ಎಲ್ಲೇ/


ನನ್ನಾಸೆ ನೂರು ಹೂವಾಗಿ ನಗಲು
ಹೂಮಾಲೆ ಮಾಡಿ ನಿನಗೆಂದೆ ತರಲು
ಕಣ್ತುಂಬ ಕಂಡೆ ರೂಪವ
ಬೆಳಕಾಗಿ ಬಂದ ದೀಪವ
/
ಎಲ್ಲೇ/

ಬಾಳೆಂಬ ಗುಡಿಗೆ ನೀ ದೇವನಾದೆ
ಕರುಣಾಳು ನೀನು ಆಧಾರವಾದೆ
ನಾ ಬೇಡಲಾರೆ ವರವೇನನೂ
ನೀ ನೀಡು ಸಾಕು ನಗೆಯೊಂದನು
/
ಎಲ್ಲೇ/