Monday 5 November 2012

ಗೆಜ್ಜೆಪೂಜೆ


ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ 
ಹೃದಯ ಸಂಗಮ ಅನುರಾಗ ಬಂಧ
ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ

ಜೀವ ಜೀವದ ಸ್ವರಸಂಚಾರ ಅಮೃತ ಚೇತನ ರಸಧಾರ

ರಾಧಾಮಾಧವ ವೇಣುವಿಹಾರ ಗೀತೆಯೆ ಪ್ರೀತಿಯ ಜೀವನಸಾರ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ದಿವ್ಯದಿಗಂತದ ಭಾಗ್ಯ ತಾರೆ ಭವ್ಯ ರಸಿಕತೆ ಬಾಳಿಗಾಸರೆ

ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ

ಹೃದಯ ಸಂಗಮ ಅನುರಾಗ ಬಂಧ ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ


Tuesday 30 October 2012

ರಾಮಾಚಾರಿ


ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ

ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ

ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ

ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ

ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ

ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ

ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

Tuesday 9 October 2012

ಅದ್ದೂರಿ


ಮುಸ್ಸಂಜೆ ವೇಳೆಲಿ, ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ... 

ಒಲವಿಲ್ಲದ ಒಡಲೆಲ್ಲಿದೆ, ತಾಯಿಲ್ಲದ ಮಡಿಲೆಲ್ಲಿದೆ.
ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ...
ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತ್ತಿದೆ....


ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ... 


ನಿನ್ನಾಣೆಗೂ ಗೊತ್ತಿಲ್ಲ ಈ ಒಂಟಿಯ ಹೊಸ ಆಟ,
ಕಳೆದು ಹೋಗೋ ಮುನ್ನ ಕೈ ಸೇರಬಾರದೆ...
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿಯ ಏನೆಂದು ನೀನೊಮ್ಮೆ ಕೇಳಬಾರದೆ...
ಹಳೆದಾದ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ, ಎದೆ ಗೂಡ ಗಡಿಯಾರ ನಿನ್ನಿಲ್ಲದೆ ನಡೆಯಲ್ಲ...
ಚೂರಗದ ಮನಸ್ಸೇಲ್ಲಿದೆ ಚೂರಾದರು ಮನ ಸೋಲಿದೆ
ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ... ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಬೇಡುತಿದೆ...


ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...


ಎದೆ ಮೇಲೆ ಮಾಡಿದ್ದ ಆ ಹಣೆಗೂ ಭಾಷೆಗೂ ಬಲವಿದ್ದರೆ ಒಲವನ್ನು ಕಾಯಬಾರದೆ...
ಉಸಿರೋಗೋ ಮುಂಚೆನೇ ಹೃದಯಕ್ಕೆ ತಾಯಾಗಿ ಬಡಿತಗಳ ಕೈ ತುತ್ತ ನೀಡಬಾರದೆ...
ಹೆಸರನ್ನು ಬರೆದಿಟ್ಟ ಗೋಡೆಗೂ ಉಸಿರಿಲ್ಲ..
ಮನಸ್ಸಾರೆ ಅಳಿಸೋಕೆ ಇದು ಗೊಂಬೆಯ ಕನಸಲ್ಲ.....
ದೂರಾದರೆ ನೋವಾಗದೇ.... ದೂರಾಗಲು ಭಯವಾಗಿದೆ.. ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತ್ತಿದೆ...
ನನ್ನ ಕನಸಿನ ಪೆಟ್ಟಿಗೆಗೆ ಬೀಗವು ಬೀಳುತ್ತಿದೆ...

ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...




Wednesday 22 August 2012

ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ

ಭಕ್ತಿಗೀತೆ 



ಕಲ್ಯಾಣಾಧ್ಬುತ ಗಾತ್ರಾಯಾ
ಕಾಮಿತಾರ್ಥ ಪ್ರದಾಯಿನೇ
ಶ್ರೀ ಮದ್ ವೆಂಕಟನಾಥಯಾ
ಶ್ರೀನಿವಾಸಯತೇ ನಮಃ
ಶ್ರೀನಿವಾಸಯತೇ ನಮಃ

ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಭೂ ಜಗಕೆ ಶುಭ ಮಾಡು ಶ್ರೀನಿವಾಸ

ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ

ಅತ್ರಿಮುನಿ ಮುಂತಾದ ಸಪ್ತಋಷಿಗಳು
ಆಕಾಶಗಂಗೆಯಿಂದ ತರಲು ಹೂಗಳು

ಅತ್ರಿಮುನಿ ಮುಂತಾದ ಸಪ್ತಋಷಿಗಳು
ಆಕಾಶಗಂಗೆಯಿಂದ ತರಲು ಹೂಗಳು

ಆಜಾನುಬಾಹುವೇ ಅಭ್ರಮೇಯ
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ

ಜಾಜಿಮಲ್ಲೆ, ಸೇವಂತಿಗೆ ಹೂಗಳು ಅರಳಿ
ಕಾದಿಹವು ಅಲಂಕರಿಸೇ ತವಪಾದವ

ಜಾಜಿಮಲ್ಲೆ, ಸೇವಂತಿಗೆ ಹೂಗಳು ಅರಳಿ
ಕಾದಿಹವು ಅಲಂಕರಿಸೇ ತವಪಾದವ

ತಂಗಾಳಿ ಸೌಗಂಧವ ಚೆಲ್ಲುತಿರುವುದು
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ

ಪಂಚವರ್ಣ ಗಿಣಿಗಳು ನಾಮ ಹಾಡಿವೆ
ಪಂಚಾಮೃತ ಅಭಿಷೇಕದ ವೇಳೆ ಕಾದಿದೆ

ಪಂಚವರ್ಣ ಗಿಣಿಗಳು ನಾಮ ಹಾಡಿವೆ
ಪಂಚಾಮೃತ ಅಭಿಷೇಕದ ವೇಳೆ ಕಾದಿದೆ

ಪಾಂಚಜನ್ಯ ಶಂಖದೊಡೆಯ ಪದ್ಮನಾಭನೇ
ಎದ್ದೇಳು ಗೋವಿಂದನೇ ವೆಂಕಟೇಶ
ಭೂ ಜಗಕೆ ಶುಭ ಮಾಡು ಶ್ರೀನಿವಾಸ
ಪೂರ್ವದಲ್ಲಿ ಸೂರ್ಯೋದಯ ಶ್ರೀರಾಮ
ಪೂಜ್ಯ ಕರ್ಮ ವೇಳೆಯಾಯ್ತು ಪುರುಷೋತ್ತಮ


Monday 11 June 2012

ಕಸ್ತೂರಿ ನಿವಾಸ


ಚಿತ್ರ: ಕಸ್ತೂರಿ ನಿವಾಸ


ಎಲ್ಲೇ ಇರು ಹೇಗೇ ಇರು
ಎಂದೆಂದು ಮನದಲ್ಲಿ ನೀ ತುಂಬಿರು
/
ಎಲ್ಲೇ/


ನನ್ನಾಸೆ ನೂರು ಹೂವಾಗಿ ನಗಲು
ಹೂಮಾಲೆ ಮಾಡಿ ನಿನಗೆಂದೆ ತರಲು
ಕಣ್ತುಂಬ ಕಂಡೆ ರೂಪವ
ಬೆಳಕಾಗಿ ಬಂದ ದೀಪವ
/
ಎಲ್ಲೇ/

ಬಾಳೆಂಬ ಗುಡಿಗೆ ನೀ ದೇವನಾದೆ
ಕರುಣಾಳು ನೀನು ಆಧಾರವಾದೆ
ನಾ ಬೇಡಲಾರೆ ವರವೇನನೂ
ನೀ ನೀಡು ಸಾಕು ನಗೆಯೊಂದನು
/
ಎಲ್ಲೇ/

Wednesday 16 May 2012

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ...

chitra: Milana
ಚಿತ್ರ: ಮಿಲನ

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ...
ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ....
ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ.......
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ.....


ಆಟದ ಬಯಲಿನ ಆಟವ ತೊರೆದು
ನೂತನ ಪುಟವನು ತೆರೆಯುವ ಸಮಯ

ಕಳಶದ ಕನ್ನಡಿ ಹೊಳೆಯುತಲಿರಲು
ಮಮತೆಯ ಧಾರೆಯ ಎರೆಯುವ ಸಮಯ

ಹಿರಿಯರ ಹೃದಯವು ಹನಿಯುವ ಸಮಯ
ಹರೆಯದ ಕಣ್ಗಳು ಅರಳುವ ಸಮಯ


ಕೈಯಲಿರಲು ಹೂಮಾಲೆ ಕಣ್ಣಿನಲ್ಲಿ ಪ್ರಾಣ
ತೆರೆಯೊಂದು ಸರಿದಾಗ ಸಂಜೀವನ.....

ಅಕ್ಷತೆಯು ಈಗ ನಾಚುತ ಕೆಂಪಗಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ


ಮಳೆಬಿಸಿಲಿರಲಿ ಸಿಹಿ ಕಹಿ ಇರಲಿ
ಆಸರೆಯಾಗುವ ವಚನದ ಸಮಯ

ಮಂಗಳ ಸೂತ್ರದಿ ಬಾಳಿನ ಪಟವು
ಬಾನಿಗೆ ಏರುವ ಪಯಣದ ಸಮಯ


ನಲುಮೆಯ ದಿಬ್ಬಣ ನಲಿಯುವ ಸಮಯ
ನೆನಪಿನ ಬಾಗಿನ ನೀಡುವ ಸಮಯ


ಅಗ್ನಿ ಸಾಕ್ಷಿಯಲ್ಲೀಗ ಅಂತರಂಗ ಮಿಲನ
ಚೆಲುವಿನ ಔತಣದ ಸಮ್ಮಿಲನ..........


ಪಲ್ಲಕ್ಕಿಯಿಂದು ಹಾರುವ ಹಕ್ಕಿಯಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ

ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ.......
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ.....


ಬಲಗಾಲನಿಟ್ಟು ಬಾಳಿಂದು ಒಳಗೆ ಬಂದಿದೆ
ಮನದಂಗಳದಲ್ಲಿ ಪ್ರೀತಿಯ ದೀಪ ಬೆಳಗಿದೆ

ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ.......
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ.....

  

Friday 30 March 2012

ಲಾಲಿಹಾಡು

ಚಿತ್ರ : ಲಾಲಿಹಾಡು

ಓಹೋ ಉಷೇ..............
ಓಹೋ ಉಷೇ.............
ಕಣ್ಣಿಗೇ..........
ಕಾಣಿಸೇ.............


ಹದಿನೇಳೂ ಚೈತ್ರಗಳಾ..
ತೇರಿನಲೀ ಬ೦ದವಳಾ
ಒಲವಿನ ಹೂವ ಹಾಸಿ ಹೇಳುವೆ ನಾ
ಸುಸ್ವಾಗತ ಸ್ವಾಗತ || ಓಹೋ ಉಷೇ ||

ಎಲ್ಲಿರಲಿ ಹೇಗಿರಲಿ ನೀ ನಗುತಿರು
ನಿನ್ನ ಹರಸಲಿ ಎಲ್ಲ ದೇವರು
ಕೈ ಹಿಡಿಯೋ ಬ೦ಧುಗಳು ಯಾರಾದರೂ
ನಿನ್ನ ಜೊತೆಯಿರೇ ಭಾಗ್ಯವ೦ತರು
ನಾಳಿನ ಬಾಳಿನ ದಾರಿಯಲಿ
ಒಳ್ಳೆಯ ದಿನಗಳೇ ಬರುತಿರಲಿ
ಈ ಮನಸಿನಾ ಮೇಲೆ
ನಿನ್ನ ಗುರುತಿದೇ
ಸುಖವಾಗಿರು..........

ನಿನ್ನಿ೦ದಾ ಹೊಸ ಬೆಳಕೂ
ನಿನ್ನಿ೦ದಾ ಹೊಸ ಬದುಕೂ
ಮರೆಯದಾ ನೂರು ನೆನಪು ತರುವ
ಮನಸಿಗೆ ವ೦ದನೆ ವ೦ದನೆ


ಸಿಹಿ ಇರಲಿ ಕಹಿ ಇರಲಿ
ಈ ಜಗದಲಿ
ನಿನ್ನ ಪಾಲಿಗೆ
ಸಿಹಿ ತು೦ಬಲಿ
ಬದುಕುಗಳು ತಿರುವುಗಳು
ಹೇಗೆ ಇರಲಿ
ನೆನಪು ಉಳಿಯಲಿ
ಕನಸು ಅರಳಲಿ

ಏಳೂ ಬೀಳಿನ ಬಾಳಿನಲಿ
ಏಳಿಗೆಯೊ೦ದೇ ನಿನಗಿರಲಿ
ಪ್ರತಿಜನ್ಮಕೂ ನಿನ್ನ
ಹೆಸರುಳಿಯಲೀ
ಹಾಯಾಗಿರು ಎ೦ದೂ
ಸುಖವಾಗಿರು
ಈ ಪಲ್ಲವಿ ನೀನಾಗಿರು ......

ನಾ ಕಾಣೋ ಲೋಕವನ್ನು

ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು
ಹೇಳುವೆಯಾ ನೀ ಓ ಇಬ್ಬನಿಯೇ
ಮೆಲ್ಲನೆ ಹೇಳು ಓ ಮಲ್ಲಿಗೆಯೇ
ನಮ್ಮಾ ಕಾಯೋ ಭೂಮೀತಾಯೆ
ನಿನ್ನ ನೋಡಲೂ ನನಗೆ ಇನ್ನೊಂದು ಜನ್ಮವೂ ಬೇಕು
ಬಾನಾಡಿಯಾ ಹಾಗೆ ನಾ ಹಾಡಿ ಬದುಕಿರಲುಬೇಕು
|| ನಾ ಕಾಣೋ ಲೋಕವನ್ನು ||


ಅರಳಿದ ಹೂಗಳ ನೋಡದೆ ಇದ್ದರೂ... ಆ ನಗೆ ನಾನರಿವೆ....
ಹರಿಯುವ ನದಿಗಳ ಕಾಣದೆ ಇದ್ದರೂ... ಸ್ಪರ್ಶದಿ ನಾ ತಿಳಿವೆ....
ಕುಹು ಕುಹು ಕೂಗುವ ಕೋಗಿಲೆ ಗುಂಪಿನ ಇಂಪಲಿ ನಾನಿರುವೆ...
ಕಲ್ಪನೆ ಲೋಕದ ಬೆನ್ನನ್ನು ಏರೀ.. ರೆಕ್ಕೆಯ ನಾ ಪಡೆವೆ...
ನೋವಿಲ್ಲಾ ನಿಮ್ಮನು ನಾ.., ನೋಡದೆ ಇದ್ದರೂ...
ನೀವು ನನ್ನಾ ನೋಡಿದರೇ..., ಸಾಕಲ್ಲವೇ ಅದು...
ನಿಮ್ಮಾ ಮುಂದೇ... ಗಾಯಕ ನಾ....
|| ನಾ ಕಾಣೋ ಲೋಕವನ್ನು ||


ರಾತ್ರಿಯ ಕಳೆಯಲು ಅಮ್ಮನು ಹಾಡಿದ ಲಾಲಿಯ ಸವಿ ಕಥೆಯು...
ಕೇಳಿದ ಕಥೆಯಲಿ ಜಗವನು ಕಂಡೆನು ನೆನಪೇ ಹಚ್ಚ ಹಸಿರು...
ಹಿರಿಯರ ಮಾತನು ಕೇಳಲು ದಕ್ಕಿತು ಅರಿವಿನ ಈ ವರವೂ....
ಕನ್ನಡ ಪದಗಳ ಬಾಗಿಲು ತೆರೆಯಿತು ಕಷ್ಟಗಳೇ ಇರವು...
ಅನುಭವದಾ ಭಾವಗಳಾ ಅನುಭವದಲ್ಲಿ....
ನಾನು ಕಂಡೇ ನಂಬಿಕೆಯಾ... ಜೀವನವಿಲ್ಲಿ...
ಹಾಡಲೆ ಬಾಳೋ ಕೋಗಿಲೆನಾ....
|| ನಾ ಕಾಣೋ ಲೋಕವನ್ನು ||

ಹನಿ ಹನಿ ಸೇರಿ ಸಾಗರವಾಗಿ

ಚಿತ್ರ : ನಿನಗಾಗಿ  

ಹನಿ ಹನಿ ಸೇರಿ ಸಾಗರವಾಗಿ
ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲಾ ರಾಗವ ಕೂಗಿ
ರಾಗವು ಕರಗಿ ಮಳೆ ಹನಿಯಾಗಿ
ಹನಿ ಹನಿ ಎಲ್ಲಾ ಭೂಮಿಯ ತಾಗಿ
ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ
ಋತುಗಳು ಉರುಳೀ ಚೈತ್ರಗಳಾಗಿ
ಓ ನವಿಲೇ ಎಲ್ಲಾ ನಿನಗಾಗೀ
ನವಿಲೇ ನಾಚುವಂಥಾ ನವಿಲೇ ನಿನಗಾಗೀ
ಓ ನವಿಲೇ ಎಲ್ಲಾ ನಿನಗಾಗೀ
ಕಣ್ಣು ಕೋರೈಸೋ ಕಣ್ಣೀಗಾಗೀ
|| ಹನಿ ಹನಿ ಸೇರೀ ||


ಚಿಗುರೋ ಎಲೆಗಳು ಬಾಗಿ ಗಿಡವಾಗಿ
ಇಬ್ಬನಿಯಾ ಕೂಗೀ ಜೊತೆಯಾಗಿ ಹೂವಾಗೀ
ಹೂವುಗಳೆಲ್ಲಾ ಮಾಗೀ ತಲೆದೂಗೀ
ಚಿತ್ತಾರವಾಗೀ ಸಂಗಾತಿ ಹಾಡಾಗೀ
ಆ ಹಾಡಿಗೇ ಈ ಗುಂಡಿಗೆ ಲಯವಾಗೀ
ಮೈ ಮರೆಯಲೂ
ಆಆಆಆಆ ಆಆಆಅ

ಆ ಹಾಡಿಗೆ ಮರುಳಾಗೀ ನಾ ಬಂದೇ ಕೊರಳಾಗೀ
ಆ ಹಾಡಿಗೆ ಮರುಳಾಗೀ ನಾ ಬಂದೇ ಕೊರಳಾಗೀ
ನಿನ್ನ ಸರಿ ಗಮ ದೊಳಗಿನ ಕವಿತೇ ಮೆಚ್ಚಿ
ಕುಣಿಯಲು ಬಂದೆ ಗರಿಯಾ ಬಿಚ್ಚಿ
ಓ ನವಿಲೇ ಎಲ್ಲಾ ನಿನಗಾಗೀ
ನವಿಲೇ ನಾಚುವಂಥಾ ನವಿಲೇ ನಿನಗಾಗೀ
|| ಹನಿ ಹನಿ ಸೇರೀ ||


ಭಾವನ ಸಾಗರ ಕರಗೀನೀರಾಗೀ ಅಲೆಯಾಗೀ ಬಂತು
ಹೃದಯಕ್ಕೆ ಕಣ್ಣಾಗೀ
ಕಣ್ಣುಗಳೆರಡೂ ಬೀಗೀ ಬಾನಾಚೆತಂಗಾಳೀಯಾಗೀ
ಹುಡುಕಿರಲೂ ಕನಸಿಗಾಗೀ
ಚುಕ್ಕೀಗಳೇ ಸಾವಿರ ಕನಸುಗಳಾಗೀ ಕಣ್ಣ್ ತುಂಬಲೂ
ನೀ ಬಂದೇ ಜೊತೆಯಾಗೀ ಆ ಕನಸಿಗೆ ಜೊತೆಯಾಗೀ
ಈ ಕನಸಿನ ಕನಸಲ್ಲಿ ಸ್ನೇಹದ ಜ್ಯೋತೀ
ಬೆಳಗಲಿ ಎಂದೂ ನೇಸರನಾಗೀ
ಒ ನವಿಲೇ ಎಲ್ಲಾ ನಿನಗಾಗೀ
ಚೆಲುವೇ ನಾಚುವಂಥಾ ಚೆಲುವೇ ನಿನಗಾಗೀ
|| ಹನಿ ಹನಿ ಸೇರೀ ||

ನಿನಗಾಗಿ

ಚಿತ್ರ: ನಿನಗಾಗಿ

ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಕಣ್ಣು ಮುಚ್ಚಿಯು ಬೆಳಕಿದೆ
ಹೆಜ್ಜೆ ಇಡದೆ ಹಾರಿದೆ
ನನ್ನ ಒಳಗೀಗ ನಾನಿಲ್ಲಾ ಏನಾದೆನಾ
ನೀನೆ ನಾನೇನಾ ನಿನ್ನೊಳಗೆ ನೀರಾದೆನಾ
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಎಲ್ಲೆಲ್ಲಿ ನಾ ನೋಡಲೀ||


ಆ ಮೋಡದಾ ನೆರಳಲು ಕಾಣುವೆ
ನೆರಳಾಗೊ ನಿನ್ನ ರೂಪವಾ..
ಈ ಇಬ್ಬನಿ ಹನಿಯಲಿ ಕಣ್ಣಲಿ
ತೋರಿಹುದು ನಿನ ಬಿಂಬವಾ
ಹಿಮದಲೂ ನಿನ್ನ ಚಿತ್ರವಾ
ನನ್ನ ಉಸಿರೆ ಬಿಡಿಸಿದೇ..
ನನ್ನ ಒಳಗೀಗ ನಾನಿಲ್ಲಾ ಏನಾದೆನಾ..
ಹಗಲುಗನಸಲ್ಲೆ ಕಣ್ಮುಚ್ಚಿ ನಡೆದಿರುವೆ ನಾ..
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಎಲ್ಲೆಲ್ಲಿ ನಾ ನೋಡಲೀ||


ಆ ಕಡಲಿನಾ ಅಲೆಗಳಾ ಮೇಲೆಯೂ
ನಿನ್ನ ತುಂಟ ಕುಣಿದಾಟವೇ..
ಆ ಚಿಗುರಿನಾ ಎಲೆಗಳಾ ಮೇಲೆ..
ನಿನ್ನ ಲಜ್ಜೆಯಾ ರೂಪವೇ..
ಬೀಸೊಗಾಳಿ ಎದೆಯಲೂ
ನಿನ್ನ ಎದೆಯಾ ಬಡಿತವೇ..
ನನ್ನ ಒಳಗೀಗ ನಾನಿಲ್ಲಾ ಏನಾದೆನಾ..
ನಿನ್ನ ನೆನೆನೆನೆದು ನಿನ್ನಲ್ಲೆ ಕಲೆದೋದೆನಾ..
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಕಣ್ಣು ಮುಚ್ಚಿಯು ಬೆಳಕಿದೆ
ಹೆಜ್ಜೆ ಇಡದೆ ಹಾರಿದೆ
ನನ್ನ ಒಳಗೀಗ ನಾನಿಲ್ಲಾ ಏನಾದೆನಾ..
ನೀನೆ ನಾನೇನಾ ನಿನ್ನೊಳಗೆ ನೀರಾದೆನಾ..
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಎಲ್ಲೆಲ್ಲಿ ನಾ ನೋಡಲೀ||

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೇ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯತಾಳದು ನೀ ಕೇಳು


ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು


ದೇವರಲಿ ಕೇಳಿದೆ ವರವ ನೀಡಿದನು ಅವನಾ ಸ್ವರವಾ
ಜಗದಲೀ......ಇದ ಯಾರು ತಿಳಿಯೋರು
ನಾ ಹಾಡೊ ಹಾಡುಗಳೆಲ್ಲ ನಾನು ಪಟ್ಟ ಬದುಕಿನ ಪಾಡು
ಜಗದಲೀ......ಇದ ಯಾರು ಅರಿಯೋರು
ಮನಸಲಿ ಮಾಳಿವಾಸ ಬರದಿದ್ದು ಮರದಡಿವಾಸ
ಇದ್ದರೇನು ನೋವಿನ ನೋವುಗಳೆಲ್ಲಾ....
ರಾಗವಿದೆ ತಾಳ ಇದೆ ನನಗು ಒಂದು ಗರ್ವವಿದೆ
ಸತ್ಯವೆಂಬುದು ನನ್ನಲಿ ಉಂಟು ಬೇರೇನು ಬೇಕು..


ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು


ಹಣಕಾಗಿ ಹಾಡೊ ಹಾಡಿಗೆ ಬಿಡಿಗಾಸು ಬೆಲೆಯು ಇಲ್ಲ
ದಿನದಿನಾ......ಧರೇ ನಾ ಯಾರಿಗೆ
ಬೆಲೆ ಇಲ್ಲದ ಹಾಡು ಆದರು ಹಣವ ಎಸೆದು ಬೆಲೆ ಕಟ್ಟುವರು
ಅವರಿಗೆ.... ಎಂದೆಂದು ಕೈಮುಗಿವೆ
ಮನಸಿರೋರು ನನ್ನ ನೋಡುವರು ಮನಸೊಳಗೆ ಕಾಣುವೆ ಅವರ
ಮರೆಯಾದ ಹಾಡು ಇದು ತಾನೆ......
ಬಾಳು ಎಂಬಾ ನಾಟಕವು ಎಷ್ಟೋ ಇದೆ ಭೂಮಿಯಲಿ
ನೋಡಬಂದೆ ನೋಟ ಏಂದರೇನೆ.......


ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೇ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯತಾಳದು ನೀ ಕೇಳು


ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

Saturday 17 March 2012

ಮಳೆಯಲಿ ಜೊತೆಯಲಿ

ಚಿತ್ರ : ಮಳೆಯಲಿ ಜೊತೆಯಲಿ
ಏನು ಹೇಳಬೇಕು ಅಂದೆ ಏನದು
ಬೇಗ ಹೇಳು ಯಾರು ಕೇಳಬಾರದು
ಸಾಕಯಿತು ಇನ್ನು ಕಾದು
ಮನಸಿನ ಪರಿಚಯ, ಕನಸಿನ ವಿನಿಮಯ‌
ಮೆಲ್ಲಗೆ ನಡೆದಿದೆ, ಕಾಣಲಾರೆಯ...
ನಾ ನೋಡು ಹೇಗಾದೆ, ನೀ ಬಂದ ತರುವಾಯ‌
ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ‌
ಹೆಚ್ಚು ಕಡಿಮೆ ನಾನೀಗ, ಹುಚ್ಚನಾಗಿ ಹೋದಂತೆ
ಹಚ್ಚಿಕೊಂಡ ಮೇಲೆ ನಿನ್ನ
ಕಷ್ಟವಾದರೇನಂತೆ ಸ್ಪಷ್ಟವಾಗಿ ಕೂಗು
ಇಷ್ಟಬಂದ ಹಾಗೆ ನನ್ನ
ಓ.... ಈಗ ಮೂಡಿದ ಪ್ರೇಮಗೀತೆಗೆ
ನೀನೆ ಸುಂದರ ಶೀರ್ಷಿಕೆ ಆದೆಯ‌
ನನ್ನೆಲ್ಲ ಭಾವಗಳು ನಿನಗೆಂದೆ ಉಳಿತಾಯ‌
ಅದ ನೀನೆ ದೋಚಿದರೆ, ನಾನಂತು ನಿರುಪಾಯ || ಏನು ಹೇಳಬೇಕು ||
ಅಂದಹಾಗೆ ಹೀಗೆಲ್ಲಾ ಎಂದು ಕೂಡ ನನ್ನಲ್ಲಿ
ಅಂದುಕೊಂಡೆ ಇಲ್ಲ ನಾನು...
ಸನ್ನೆಯಲ್ಲೆ ಏನೇನೋ ಅನ್ನುವಾಗ ನೀನೆ
ಇನ್ನು ಇಲ್ಲ ಬಾಕಿ ಏನು...
ನಿನ್ನ ಕಣ್ಣಿನ ಮಿಂಚೆ ಕಲಿಸಿದೆ
ಸೀದ ಜೀವಕೆ ನಾಟುವ ಭಾಷೆಯ..
ದಿನರಾತ್ರಿ ನನಗೀಗ ಕನಸಲ್ಲೆ ವ್ಯವಸಾಯ‌
ದಿನಗೂಲಿ ನೀಡುವೆಯ, ನಾನಂತು ನಿರುಪಾಯ... || ಏನು ಹೇಳಬೇಕು ||
ಮಾತನಾಡಬೇಡ ನೀನು ಈ ಕ್ಷಣ
ಪ್ರೀತಿಯಲ್ಲಿ ಬೀಳುವಾಗ ಈ ಮನ‌
ಮಾತಾಡಲಿ ನನ್ನ ಮೌನ...
ಮನಸಿನ ಪರಿಚಯ, ಕನಸಿನ ವಿನಿಮಯ‌
ಮೆಲ್ಲಗೆ ನಡೆದಿದೆ, ಕಾಣಲಾರೆಯ...
ನಾ ನೋಡು ಹೇಗಾದೆ, ನೀ ಬಂದ ತರುವಾಯ‌
ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ‌..

ಮೈಲಾರಿ

ಚಿತ್ರ: ಮೈಲಾರಿ 

ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದಾ ನನ್ನಲಿ ನೀನೇಕೆ ??
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..


ಕನಸನು ಕೊಂದಾಯಿತು
ಮಸಣಕೆ ತಂದಾಯಿತು
ಹೂಳುವಾ ವೇಳೆ ಅಳು ಯಾಕಿನ್ನು?
ಹಕ್ಕಿಯು ಹಾರೋಯಿತು
ಗೂಡಿದು ಹಾಳಾಯಿತು..
ಯಾರದೋ ಕಣ್ಣಾ ಬಲಿ ನಾವೇನು. ...
ಸಾವಿರ ಶೂಲಾ ಚುಚ್ಚೋ
ಗಾಯಕೂ ತುಂಬಾ ಹೆಚ್ಚು
ಪ್ರೀತಿಯಿಂದಾನೇ ಆಗೋ ಈ ನೋವು ..


ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದ ನನ್ನಲಿ ನೀನೇಕೆ ??


ಅರಳಿದಾ ಕೆಂದಾವರೆ .
ದೇವರಿಗೆ ಎಂದಾದರೆ ..
ಬಾಡಿ ಹೋಯ್ತಲ್ಲ ಪೂಜೆಗೆ ಮುನ್ನ ...
ಭೂಮಿಯೇ ಹೋಳಾದರೆ
ಬಾನದು ಚೂರಾದರೆ
ಬಾಳುವಾ ಮಾತು ಅದು ಸಾಧ್ಯಾನಾ..
ಪ್ರೀತಿಗೆ ಸೋಲೇ ಇಲ್ಲ ..
ಎನ್ನುವ ದೊಡ್ಡಾ  ಸುಳ್ಳ ..
ನಂಬಲೇ ಬೇಡ ಇನ್ನು ನೀನೆಂದು ...


ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದ ನನ್ನಲಿ ನೀನೇಕೆ ??
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..

Friday 16 March 2012

ಯಾವ ಮೋಹನ ಮುರಳಿ ಕರೆಯಿತು

ಚಿತ್ರ: ಅಮೇರಿಕಾ ಅಮೇರಿಕಾ

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ
ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ವಿವಶವಾಯಿತು ಪ್ರಾಣ ....ವಿವಶವಾಯಿತು ಪ್ರಾಣ ....
ಪರವಶವು ನಿನ್ನೀ ಚೇತನ
ವಿವಶವಾಯಿತು ಪ್ರಾಣ ....ವಿವಶವಾಯಿತು ಪ್ರಾಣ ....
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ.....
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಅರಸು

ಚಿತ್ರ: ಅರಸು

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು..
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಕಣ್ಣ್ ಗಳೆರದು ಒಂದೇ ಕನಸು
ಎಲ್ಲೀ ನಿನ ಮನಸು

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು


ಮನಸು ತುಂಬಿ ತುಳುಕಿ ಹೋದ ಧಾರೆ ನೀನಿಂದು
ಕನಸಿನಿಂದ ಮನಸಿನೆಡೆಗೆ ಹೊರಡು ನೀನಿಂದು

ಒಂದು ಬದುಕು ಇನ್ನೊಂದು ಬೆಳಕು
ಒಂದು ಮಿಡಿತ ಮತ್ತೊಂದು ಹೃದಯ
ಬಿಡಿಸಲಾಗುವುದೆ
ಮನವಾ ಮನವೇ ಮರೆಯುವುದೇ

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು


ನೆನಪಿಗೊಂದು ಸಿಹಿಯ ನೋವು
ನನಗು ಇರಲಿ ಬಿಡು
ಕಸಿದು ಕೊಂಡ ಕಹಿಯ ನೆನಪು
ನನಗೆ ಬೇಡ ಬಿಡು

ಒಂದು ಭಾವ ಮತ್ತೊಂದು ಕವಿತೆ
ಬೆಂಕಿ ಇರದೆ ಉರಿಯುವುದೇ ಹಣತೆ
ಬೇದ ಮಾಡುವುದೇ
ಕಣ್ಣ ಕಣ್ಣೇ ಕುಕ್ಕುವುದೆ

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಹೃದಯವ ನೀ ಅರಸು
ಹೃದಯವ ನೀ ಅರಸು
ಹೃದಯವ ನೀ ಅರಸು

ವಂಶಿ

ಚಿತ್ರ : ವಂಶಿ
ಭುವನಂ ಗಗನಂ, ಸಕಲಂ ಶರಣಂ
ಅಖಿಲಂ ನಿಖಿಲಂ, ಶಿವನೇ ಶರಣಂ.
ಉಸಿರನು ಕಾಯಲು, ಹಸಿರನು ನೀಡಿದ.
ಇರುಳನು ನೀಗಲು, ಹಗಲನು ನೀಡಿದ.
ಶರಣು ಎನಲು ಇವನು ಒಲಿದು ಬರುವ
ಎದುರು ನಿಲಲು ಇವನು ಮುನಿದೆ ಬಿಡುವ. ||ಭುವನಂ||

ತಾಯಿಗೆ ಮಗನೆ ಜೀವ, ಆ ಮಗನಿಗೆ ತಾಯೇ ದೈವ.
ಇಲ್ಲಿ ತ್ಯಾಗ ಪ್ರೀತಿಯ ಕರುಳಿನ ಬಂಧ ನೋಡು.
ಜಗದ ಭಾರಿ ಸಾಗರವ ಜಿಗಿದು ಈಜಿ ಮೀರಿಸುವ
ಪ್ರಬಲ ಧೈರ್ಯ ನೀಡಿರುವ ಶಿವನೇ, ಏ ಶಿವನೇ ||ಭುವನಂ||

ಕಾಲ ಓಡುತಿದೆ ಬೇಗ, ಸರಿಯಾಗಿ ಬಾಳುವುದೇ ಯೋಗ.
ಜನಕಾಗಿ ಬಾಳುವ ಸೇವಕ ನಾನು ಈಗ.
ಶಿವನು ಮೇಲೆ ನೋಡಿರುವ ಜನರು ಮಾಡೋ ಕಾಯಕವ,
ನಿಜದ ಅಂಕ ನೀಡಿರುವ ತಿಳಿಯೋ ,ಏ ಶಿವನೇ ||ಭುವನಂ||

Wednesday 7 March 2012

ಗಂಡುಗಲಿ ಕುಮಾರರಾಮ

ಚಿತ್ರ :- ಗಂಡುಗಲಿ ಕುಮಾರರಾಮ

ಗಿಣಿ ರಾಮ,  ಗಿಣಿ ರಾಮ, ಈ ಸಮಯ ಮಧುರಮಯ ಒಲವನು ತಿಳಿಸುವೆಯಾ.....

ಗಿಣಿ ರಾಮ,  ಗಿಣಿ ರಾಮ, ಈ ಸಮಯ ಮಧುರಮಯ ಒಲವನು ತಿಳಿಸುವೆಯಾ.....


ಗಿಣಿ ರಾಮ,  ಗಿಣಿ ರಾಮ.................
ಚತುರೆ ನೀಡಿದ ಉಂಗುರದೊಳಗೆssssssss
ಚತುರೆ ನೀಡಿದ ಉಂಗುರದೊಳಗೆ ಹೃದಯದಾಸೆಯು ತುಂಬಿರಬಹುದೇ............
ಹೃದಯದಾಸೆಯು ತುಂಬಿರಬಹುದೇ



ಕಾತರನೇ ಪ್ರೇಮದನೆ ಸೇರುವುದೇ ಶರಣೆsssssss


ಗಿಣಿ ರಾಮ,  ಗಿಣಿ ರಾಮ, ಈ ಸಮಯ ಮಧುರಮಯ ಒಲವನು ತಿಳಿಸುವೆಯಾ.....


ಗಿಣಿ ರಾಮ,  ಗಿಣಿ ರಾಮ.................
ಗಿಣಿಯ ಒಳಗಡೆ ಜೀವವನ್ನಿರಿಸಿsssssssss

ಗಿಣಿಯ ಒಳಗಡೆ ಜೀವವನ್ನಿರಿಸಿ ಒಲವಿನುಡುಗೊರೆ ನೀಡಿರಬಹುದೇ....... 
ಒಲವಿನುಡುಗೊರೆ ನೀಡಿರಬಹುದೇ


ಸಡಗರವೋ ಮುಜುಗರವೋ ಪ್ರೇಮದ ಕಾತುರವೋssss 


ಗಿಣಿ ರಾಮ,  ಗಿಣಿ ರಾಮ, ಈ ಸಮಯ ಮಧುರಮಯ ಒಲವನು ತಿಳಿಸುವೆಯಾ.....
ಗಿಣಿ ರಾಮ,  ಗಿಣಿ ರಾಮ.................

Monday 27 February 2012

ಸರಿಗಮ

ಚಿತ್ರ : ಹೂ 


ಸರಿಗಮ ಸರಿ ಮಿಡಿ ಮಿಡಿ ಮಿಡಿ ಸ್ನೇಹ ತಂತಿಯ....
ಸಿಹಿ ಸಿಹಿ ಸಿಹಿ ಜೇನಿಗಿಂತ ಸಿಹಿ ಸ್ನೇಹ ಕಲರವ....
ಕಣ್ಣಾಗಿ ಕಾಡುವೆ.. ಹೃದಯದಿ ಹಾಡುವೆ...
ಜೊತೆಯಾಗಿ ಹುಟ್ಟಲಿಲ್ಲ ನನಗಂತೂ ನೀನೆ ಎಲ್ಲಾ..
ಮಾಯಾಗಾರ ಸೃಷ್ಟಿಯಲ್ಲಿ ಹೂಗಾರ ನೀನೆ ಇಲ್ಲಿ.....


ಕಣ್ಣಲಿ ಕಣ್ಣಾಗಿ, ಮಣ್ಣಲಿ ಮಣ್ಣಾಗಿ, ನೆರಳಾಗಿ ನಾ ಕಾಯುವೇ..
ಅರಳಿದ ಹೂವಾಗಿ ಮನದಲಿ ನೀನು ಮುಡಿಯಲು ಹೂವೇತಕೆ...
ನನ್ನ ನಿನ್ನ ಆಸೆಯು ಒಂದೇ ಜೊತೆ ಜೊತೆ ಸಾಗುವ ಮುಂದೆ...
ನೀನೆ ನನ್ನ ಕನ್ನಡಿಯಂತೆ ಕಣ್ಣಾ ಮುಚ್ಚಿ ಮರೆವ ಚಿಂತೆ....
ಮಡಿಲಲ್ಲಿ ತೂಗದೆ ತಾಯಾಗಿ ಕೂಸಿಗೆ ||ಸರಿಗಮ||


ನಕ್ಕರೆ ಪನ್ನೀರು ಅತ್ತರೆ ಕಣ್ಣೀರು ನಾನಾಗಿ ಬೆರೆತೋಗುವೆ
ಮುಂಗಾರೇ ಬರಲಿ ಹಿಂಗಾರು ಇರಲಿ ಸೂರಾಗಿ ನಾ ಕಾಯುವೇ....
ನಿನ್ನ ನುಡಿ ಮಂತ್ರದ ಹಾಗೇ, ನಗು ಪುಣ್ಯ ಕ್ಷೇತ್ರದ ಹಾಗೇ..
ಆಸೆ ಭಾಷೆ ಎಲ್ಲವು ನೀನೇ, ಹಾವ ಭಾವ ಎಲ್ಲವು ನೀನೇ..
ಹೆಗಲಲ್ಲಿ ಹೊರದನೆಯೇ ತಂದೆಯೇ ನೀ ಕೂಸಿಗೆ ||ಸರಿಗಮ||





ಮನಸು ರಂಗಾಗಿದೆ ಇಂದು

ಚಿತ್ರ : ಸ್ಲಂ ಬಾಲ 


ಮನಸು ರಂಗಾಗಿದೆ ಇಂದು, ಚೆಲುವೆ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ, ಏನೋ ಆವೇಗ....
ಬದುಕು ಇಂಪಾಗಿದೆ ಇಂದು, ಚೆಲುವ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ, ಏನೋ ಆವೇಗ.....
ಏನೋ ಮಾಟ, ಏನೋ ಮೋಡಿ, ಬರುವುದೆಲ್ಲ ಬಂದೆ ಬಿಡಲಿ
ಗಗನದಾಚೆ ಬಯಲ ತುದಿಗೂ ಲಗ್ಗೆ ಇಡುವಾ.....
ಯಾವುದೋ ವೇಗ, ಏನೋ ಆವೇಗ..............


ಹೂವಂಥ ನಗೆ ಮಲ್ಲಿಗೆ ಮುಡಿದವಳೇ... ನಾ ಕೊಡುವೆ ಕಾಲೊಂದಿಗೆ
ನೀ ಕೊಟ್ಟ ಕಾಲೊಂದಿಗೆ, ನನ್ನೊಳಗೆ ಕನಸುಗಳ ಕಣ್ತುಂಬಿದೆ..
ಕತ್ತಲೆಯ ತೊಳೆದಂತೆ, ಬೆಳಕು ನೀ ಬಾಳಿಗೆ
ಈ ನಿನ್ನ ಕಲ್ಪನೆಗೆ, ತಾರೆಗಳ್ ಹೊದಿಸಿ ಲಾಲಿಯ ನಾ ಹಾಡುವೆ
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ ||ಮನಸು||


ನಿನ್ನೆದೆಯ ನಾ ಅಪ್ಪಲು, ಈ ಹೃದಯ ನವಿಲಂತೆ ಕುಣಿದಾಡಿತು
ಈ ಮಾತ ನೀ ಹೇಳಲು, ತುಟಿಯ ಸನಿಹ ಬರುವಾಸೆ ನನಗಾಯಿತು
ನೆರಳಾಗಿ ನಾನಿರುವೆ, ಜೊತೆಯಾಗಿ ಸಾಗೋಣ
ಸಾಗುವ ಈ ದಾರಿಯಲಿ ನೂರೆಂಟು ನೆನಪಿನ ಬುತ್ತಿಯ ಕಟ್ಟೋಣ ಬಾ......
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ ||ಮನಸು||