Saturday 17 September 2011

ಓಂ ಬ್ರಹ್ಮಾನಂದ

ಓಂ ಬ್ರಹ್ಮಾನಂದ ಓಂಕಾರ ಆತ್ಮನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ

ಹೇ ದಿನಕರ ಶುಭಕರ ಧರೆಗೆ ಬಾ ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ
ಮಾನಸ ಮಂದಿರ ತುಂಬು ಓಂಕಾರನಾದವೊ // ಓಂ //

ನಗುವ ಮನಸೆ ಸಾಕು ನಮಗೆ ಹಗಲುಗನಸೇ ಬೇಡ
ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ
ತಂದೆ ತಾಯೆ ದೈವ ಗುರುವೆ ನಮ್ಮ ಜೀವ ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸೂ //ಓಂ//

ಸತ್ಯ ಹೇಳೊ ಕನ್ನಡಿಯಂತೆ ಅಂತರಂಗ ಮಾಡು
ದಯೆ ತೋರೊ ಧರಣಿಯಂತ ಮನೊಧರ್ಮ ನೀಡು
ನೊಂದ ಎಲ್ಲ ಜೀವ ನನ್ನದೆಂಬ ಭಾವ ಬಾಳಿನಲ್ಲಿ ತುಂಬೊ ವಿದ್ಯೆ ವಿನಯ ಕರುಣಿಸೊ//ಓಂ//

No comments:

Post a Comment